ಅವಳ ಕಣ್ಣ ನೋಟ
ತಿಳಿಸದೇ ಮನದಲಿ ಆಡಿದೆ ಆಟ
ಆಗ ಮನದ ತುಂಬಾ
ಬೇರೇನಿಲ್ಲ ಅವಳದೇ ಬಿಂಬ, ಒಲವ ಸೆಳೆವ ಪ್ರೀತಿ ಎಂಬ
ಕರೆಯ ಮಾಡಿದೆ.
ಕಣ್ಣು ಮುಚ್ಚಿ ಕೂತರು, ನೆನಪಿನಲ್ಲಿ ಅವಳದೇ ನೆರಳು
ಕನಸಿನಲ್ಲಿ ಮಲಗಲು ಬಿಡಳು, ಅವಳೇ ಬರುವಳು.
ಅವಳ ಕಣ್ಣ ನೋಟ
ತಿಳಿಸದೇ ಮನದಲಿ ಆಡಿದೆ ಆಟ.
ನಡೆವ ದಾರಿಯಲ್ಲಿ
ಜೊತೆಗೆ ಅವಳು ಬರುತಿಹಳೆಂದು
ನುಡಿವ ಮಾತಿನಲ್ಲಿ
ಸ್ವರಕೆ ಹುಸಿರು ಆಗಿಹಳೆಂದು, ಜೊತೆಗೆ ಅವಳು ನುಡಿದಿಹಳೆಂದು
ಏನೋ ಕಲ್ಪನೆ.
ಎಲ್ಲಿ ಹೋದರಲ್ಲಿ, ಅವಳೇ ನನ್ನ ಜೊತೆಯಾಗಿಹಳು
ಎಲ್ಲಿ ನೋಡಿದರಲ್ಲೇ ಇಹಳು, ಏನು ಮಾಯೆಯೋ.
ಅವಳ ಕಣ್ಣ ನೋಟ
ತಿಳಿಸದೇ ಮನದಲಿ ಆಡಿದೆ ಆಟ.
ನಿಂತ ನೀರಿಗೊಂದು
ಕಲ್ಲು ಎಸೆದಂತಾಗಿದೆ ತನುವು
ತಂಪು ಗಾಳಿಯಲ್ಲಿ
ಹಾರ ಬೇಕೆಂದಿದೆ ಮನವೂ, ಯಾರ ಬಲೆಗೂ ನಿಲುಕದ ಒಲವು
ಕದಡಿ ಹೋಗಿದೆ.
ಬಾನ ತೆಕ್ಕೆಯಲ್ಲಿ, ಹಾರುವಂತ ಹಕ್ಕಿಯು ನಾನು
ಪ್ರಾಣವಾಯುವಾದರವಳು, ಇದುವೇ ಮೋಹವೋ.
ಅವಳ ಕಣ್ಣ ನೋಟ
ತಿಳಿಸದೇ ಮನದಲಿ ಆಡಿದೆ ಆಟ.
ಅವಳ ಕಂಡಿನಿಂದ
ಕವಿಯ ಹಾಗೆ ಹಾಗಿದೆ ಮನವೂ
ಅವಳ ಕಣ್ಣಿನಿಂದ
ಬಂದ ಪ್ರೇಮಸುಧೆಯ ಚೆಲುವು, ಕಾವ್ಯವನ್ನು ಬರೆಯುವ ವರವು
ನನ್ನದಾಗಿದೆ.
ನನ್ನ ಮನದ ಕೂಗು, ಕಾವ್ಯವಾಗಿ ಅವಳ ಮನವ
ತಲುಪಿದಲ್ಲಿ ಸಾರ್ಥಕ ಒಲವು, ಇದುವೇ ಕವಿತೆಯೋ.
ಅವಳ ಕಣ್ಣ ನೋಟ
ತಿಳಿಸದೇ ಮನದಲಿ ಆಡಿದೆ ಆಟ.
*----- ಜಯಸುತ -----*
Wednesday, April 4, 2007
ಮುಂಜಾನೆಯ ಮಂಜಿನ ತೆರೆ
ಮುಂಜಾನೆಯಲಿ, ಮಂಜಿನ ತೆರೆಯೊಳು
ನುಸುಳ ಬಯಸಿದೆ ಬೆಳಕು,
ಆ ಕವಿದ ಮಬ್ಬಲಿ ಕಣ್ಣಿಗೆ ತೋರದಿದೆ ನಡೆಯು,
ಹೇಗೆ ನಾ ದಾಟಲಿ ಆ ಮಂಜಿನ ತೆರೆಯನು,
ಹೇಗೆ ನಾ ಹುಡುಕಲಿ ಕವಿದ ಮಬ್ಬಲಿ ಬೆಳಕನು,
ತೋರು ಬಾ ಸಹ್ಯಾದ್ರಿಯೇ, ತೋರು ಬಾ ಕೊಡಚಾದ್ರಿಯೇ,
ನಿನ್ನ ತವರಿನ ದಾರಿಯ, ನಿನ್ನ ತವರಿನ ದಾರಿಯ.
ಹಸಿರಿನ ಮಡಿಲಲಿ ಕಣ್ಗಳು ಮಲಗುತಲಿವೆ
ಪವಳಿದ ಕಣ್ಣಸುಳೆಗೆ ಮೌನದ ಜೋಗುಳವಿದೆ
ಗಗನಕೆ ಕೈಚಾಚುತ ಗಿರಿಶೃಂಗವು ಮೈತುಂಬಿದೆ
ಜಲಧಾರೆಯ ಕಣ್ತುಂಬಲು ಮನದೊಳಗೆ ಕಾತರವಿದೆ
ಈ ಕಾತರ ನನಗೆ ಆತುರ ತಂದಿದೆ
ಅದ ನೋಡಲು ಮನವು ಪರಿತಪಿಸಿದೆ.
ತೋರು ಬಾ ಸಹ್ಯಾದ್ರಿಯೇ, ತೋರು ಬಾ ಕೊಡಚಾದ್ರಿಯೇ,
ನಿನ್ನ ತವರಿನ ದಾರಿಯ, ನಿನ್ನ ತವರಿನ ದಾರಿಯ.
ಸುರಿಯುವ ಮಳೆಯಲಿ ಚಳಿಯು ಮೈಗೂಡಿದೆ
ತಂಗಾಳಿಯು ಮಾತಾಡದೆ ಮೌನದಿ ತೇಲುತಲಿದೆ
ಹಕ್ಕಿಯ ಕಲರವ ಋತುಗಳ ಕರೆದಂತಿದೆ
ತೊರೆಗಳು ಮಲೆನಾಡಿನ ತವರಿನ ಸಿರಿಯಂತಿವೆ
ಆ ಸ್ವರ್ಗ, ಭೂಸ್ವರ್ಗಕೆ ಸಾಮ್ಯವೇ
ಇದ ಸವಿಯಲು ಈ ಜನುಮ ಸಾಲದು ಅಲ್ಲವೇ,
ತೋರು ಬಾ ಸಹ್ಯಾದ್ರಿಯೇ, ತೋರು ಬಾ ಕೊಡಚಾದ್ರಿಯೇ,
ನಿನ್ನ ತವರಿನ ದಾರಿಯ, ನಿನ್ನ ತವರಿನ ದಾರಿಯ.
ಮುಂಜಾನೆಯಲಿ, ಮಂಜಿನ ತೆರೆಯೊಳು
ನುಸುಳ ಬಯಸಿದೆ ಬೆಳಕು,
ಆ ಕವಿದ ಮಬ್ಬಲಿ ಕಣ್ಣಿಗೆ ತೋರದಿದೆ ನಡೆಯು,
ಹೇಗೆ ನಾ ದಾಟಲಿ ಆ ಮಂಜಿನ ತೆರೆಯನು,
ಹೇಗೆ ನಾ ಹುಡುಕಲಿ ಕವಿದ ಮಬ್ಬಲಿ ಬೆಳಕನು,
ತೋರು ಬಾ ಸಹ್ಯಾದ್ರಿಯೇ, ತೋರು ಬಾ ಕೊಡಚಾದ್ರಿಯೇ,
ನಿನ್ನ ತವರಿನ ದಾರಿಯ, ನಿನ್ನ ತವರಿನ ದಾರಿಯ.
*----- ಜಯಸುತ -----*
ನುಸುಳ ಬಯಸಿದೆ ಬೆಳಕು,
ಆ ಕವಿದ ಮಬ್ಬಲಿ ಕಣ್ಣಿಗೆ ತೋರದಿದೆ ನಡೆಯು,
ಹೇಗೆ ನಾ ದಾಟಲಿ ಆ ಮಂಜಿನ ತೆರೆಯನು,
ಹೇಗೆ ನಾ ಹುಡುಕಲಿ ಕವಿದ ಮಬ್ಬಲಿ ಬೆಳಕನು,
ತೋರು ಬಾ ಸಹ್ಯಾದ್ರಿಯೇ, ತೋರು ಬಾ ಕೊಡಚಾದ್ರಿಯೇ,
ನಿನ್ನ ತವರಿನ ದಾರಿಯ, ನಿನ್ನ ತವರಿನ ದಾರಿಯ.
ಹಸಿರಿನ ಮಡಿಲಲಿ ಕಣ್ಗಳು ಮಲಗುತಲಿವೆ
ಪವಳಿದ ಕಣ್ಣಸುಳೆಗೆ ಮೌನದ ಜೋಗುಳವಿದೆ
ಗಗನಕೆ ಕೈಚಾಚುತ ಗಿರಿಶೃಂಗವು ಮೈತುಂಬಿದೆ
ಜಲಧಾರೆಯ ಕಣ್ತುಂಬಲು ಮನದೊಳಗೆ ಕಾತರವಿದೆ
ಈ ಕಾತರ ನನಗೆ ಆತುರ ತಂದಿದೆ
ಅದ ನೋಡಲು ಮನವು ಪರಿತಪಿಸಿದೆ.
ತೋರು ಬಾ ಸಹ್ಯಾದ್ರಿಯೇ, ತೋರು ಬಾ ಕೊಡಚಾದ್ರಿಯೇ,
ನಿನ್ನ ತವರಿನ ದಾರಿಯ, ನಿನ್ನ ತವರಿನ ದಾರಿಯ.
ಸುರಿಯುವ ಮಳೆಯಲಿ ಚಳಿಯು ಮೈಗೂಡಿದೆ
ತಂಗಾಳಿಯು ಮಾತಾಡದೆ ಮೌನದಿ ತೇಲುತಲಿದೆ
ಹಕ್ಕಿಯ ಕಲರವ ಋತುಗಳ ಕರೆದಂತಿದೆ
ತೊರೆಗಳು ಮಲೆನಾಡಿನ ತವರಿನ ಸಿರಿಯಂತಿವೆ
ಆ ಸ್ವರ್ಗ, ಭೂಸ್ವರ್ಗಕೆ ಸಾಮ್ಯವೇ
ಇದ ಸವಿಯಲು ಈ ಜನುಮ ಸಾಲದು ಅಲ್ಲವೇ,
ತೋರು ಬಾ ಸಹ್ಯಾದ್ರಿಯೇ, ತೋರು ಬಾ ಕೊಡಚಾದ್ರಿಯೇ,
ನಿನ್ನ ತವರಿನ ದಾರಿಯ, ನಿನ್ನ ತವರಿನ ದಾರಿಯ.
ಮುಂಜಾನೆಯಲಿ, ಮಂಜಿನ ತೆರೆಯೊಳು
ನುಸುಳ ಬಯಸಿದೆ ಬೆಳಕು,
ಆ ಕವಿದ ಮಬ್ಬಲಿ ಕಣ್ಣಿಗೆ ತೋರದಿದೆ ನಡೆಯು,
ಹೇಗೆ ನಾ ದಾಟಲಿ ಆ ಮಂಜಿನ ತೆರೆಯನು,
ಹೇಗೆ ನಾ ಹುಡುಕಲಿ ಕವಿದ ಮಬ್ಬಲಿ ಬೆಳಕನು,
ತೋರು ಬಾ ಸಹ್ಯಾದ್ರಿಯೇ, ತೋರು ಬಾ ಕೊಡಚಾದ್ರಿಯೇ,
ನಿನ್ನ ತವರಿನ ದಾರಿಯ, ನಿನ್ನ ತವರಿನ ದಾರಿಯ.
*----- ಜಯಸುತ -----*
ಪ್ರೀತಿ ನೀ ಚೆನ್ನಾಗಿರು
ಚೆನ್ನಾಗಿರು ನೀ ಚೆನ್ನಾಗಿರು
ನನ್ನ ಪ್ರೀತಿ ತೊರೆದರೂ ನೀ ಚೆನ್ನಾಗಿರು.
ಕನಸಲ್ಲಿ ನೂರು ಆಸೆಗಳ ಬಚ್ಚಿಟ್ಟು
ಮನಸಲ್ಲಿ ನೂರು ನೋವುಗಳ ಮುಚ್ಚಿಟ್ಟು
ನಾ ಬಂದಿರುವೆ ನಿನಗೆ ಶುಭ ಕೋರಲು.
ಚೆನ್ನಾಗಿರು ನೀ ಚೆನ್ನಾಗಿರು
ನನ್ನ ಪ್ರೀತಿ ತೊರೆದರೂ ನೀ ಚೆನ್ನಾಗಿರು.
ಒಡಲಲ್ಲಿ ಕಣ್ಣೀರ ಮಳೆಯಾದರು
ಮುಖದಲ್ಲಿ ನಗುವೆಂಬ ಕಾರಂಜಿಯು
ನೆನಪಲ್ಲಿ ಆ ಪ್ರೀತಿ ಬಿರುಗಾಳಿಯು
ನಿಜದಲ್ಲಿ ಈ ಸ್ನೇಹ ಸಂಕೋಲೆಯು
ತ್ಯಾಗಕ್ಕೆ, ಎಂದೂ ಬಾಳಬೇಕು ನಾವು
ಪ್ರೇಮಕ್ಕೆ, ಕೊನೆಗೆ ಸಿಗೋದು ಬರೀ ನೋವು................
ಚೆನ್ನಾಗಿರು ನೀ ಚೆನ್ನಾಗಿರು
ನನ್ನ ಪ್ರೀತಿ ತೊರೆದರೂ ನೀ ಚೆನ್ನಾಗಿರು.
ಕಣ್ಣಲ್ಲಿ ಚಿಗುರೊಡೆದ ಪ್ರತಿಬಿಂಬವು
ಎದುರಲ್ಲಿ ಕವಲೊಡೆದ ಸಂಬಂಧವು
ಮಾತಲ್ಲಿ ಮರೆಯಾದ ಆ ಮೌನವು
ಈಗಿಲ್ಲಿ ಹಾಡಿಗೊಂದು ಒಳ ಅರ್ಥವು
ತ್ಯಾಗಕ್ಕೆ, ಎಂದೂ ಬಾಳಬೇಕು ನಾವು
ಪ್ರೇಮಕ್ಕೆ, ಕೊನೆಗೆ ಸಿಗೋದು ಬರೀ ನೋವು................
ಚೆನ್ನಾಗಿರು ನೀ ಚೆನ್ನಾಗಿರು
ನನ್ನ ಪ್ರೀತಿ ತೊರೆದರೂ ನೀ ಚೆನ್ನಾಗಿರು.
*----- ಜಯಸುತ -----*
ನನ್ನ ಪ್ರೀತಿ ತೊರೆದರೂ ನೀ ಚೆನ್ನಾಗಿರು.
ಕನಸಲ್ಲಿ ನೂರು ಆಸೆಗಳ ಬಚ್ಚಿಟ್ಟು
ಮನಸಲ್ಲಿ ನೂರು ನೋವುಗಳ ಮುಚ್ಚಿಟ್ಟು
ನಾ ಬಂದಿರುವೆ ನಿನಗೆ ಶುಭ ಕೋರಲು.
ಚೆನ್ನಾಗಿರು ನೀ ಚೆನ್ನಾಗಿರು
ನನ್ನ ಪ್ರೀತಿ ತೊರೆದರೂ ನೀ ಚೆನ್ನಾಗಿರು.
ಒಡಲಲ್ಲಿ ಕಣ್ಣೀರ ಮಳೆಯಾದರು
ಮುಖದಲ್ಲಿ ನಗುವೆಂಬ ಕಾರಂಜಿಯು
ನೆನಪಲ್ಲಿ ಆ ಪ್ರೀತಿ ಬಿರುಗಾಳಿಯು
ನಿಜದಲ್ಲಿ ಈ ಸ್ನೇಹ ಸಂಕೋಲೆಯು
ತ್ಯಾಗಕ್ಕೆ, ಎಂದೂ ಬಾಳಬೇಕು ನಾವು
ಪ್ರೇಮಕ್ಕೆ, ಕೊನೆಗೆ ಸಿಗೋದು ಬರೀ ನೋವು................
ಚೆನ್ನಾಗಿರು ನೀ ಚೆನ್ನಾಗಿರು
ನನ್ನ ಪ್ರೀತಿ ತೊರೆದರೂ ನೀ ಚೆನ್ನಾಗಿರು.
ಕಣ್ಣಲ್ಲಿ ಚಿಗುರೊಡೆದ ಪ್ರತಿಬಿಂಬವು
ಎದುರಲ್ಲಿ ಕವಲೊಡೆದ ಸಂಬಂಧವು
ಮಾತಲ್ಲಿ ಮರೆಯಾದ ಆ ಮೌನವು
ಈಗಿಲ್ಲಿ ಹಾಡಿಗೊಂದು ಒಳ ಅರ್ಥವು
ತ್ಯಾಗಕ್ಕೆ, ಎಂದೂ ಬಾಳಬೇಕು ನಾವು
ಪ್ರೇಮಕ್ಕೆ, ಕೊನೆಗೆ ಸಿಗೋದು ಬರೀ ನೋವು................
ಚೆನ್ನಾಗಿರು ನೀ ಚೆನ್ನಾಗಿರು
ನನ್ನ ಪ್ರೀತಿ ತೊರೆದರೂ ನೀ ಚೆನ್ನಾಗಿರು.
*----- ಜಯಸುತ -----*
Subscribe to:
Comments (Atom)
